
*ಶ್ರೀ ಭಗವಾನ್ ವಿಷ್ಣುವಿನ ಭಕ್ತಿ ಹೊಂದುವದು ಬಲು ಸುಲಭ:- -೧)ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ, ಸರ್ವತಂತ್ರಸ್ವತಂತ್ರ, ಪುರುಷೋತ್ತಮ, ಸೃಷ್ಟ್ಯಾದಿ ಅಷ್ಟಕರ್ತ, ಜಗನ್ನಿಯಾಮಕಾದಿ ಅನಂತಗುಣಗಳಿಂದ ಮಂಡಿತನಾದ ಭಗವಂತ ಹೀಗಿರುವ, ಇಂತಹವನನ್ನು ಕಾಣಲು ಸಾಧ್ಯವೆ, ಸೇರಲು ಸುಲಭನೆ, ಹೊಂದಲಾಹುದೇ ಎಂದೆಲ್ಲಾ ಪ್ರಶ್ನೆಗಳು ಸಹಜ.ಆದರೇ ಶಾಸ್ತ್ರಗಳು ಈ ಶ್ರೀಹರಿಯ ಬಗ್ಗೆ ಹೇಳುವುದು ಒಂದೇ ಮಾತು *'ಸುಲಭನೋ ಹರಿ'* ಎಂದು, *'ಶ್ರೀಹರಿ ಕರುಣಾಸಮುದ್ರ'*. ಸಕಲ ಶಾಸ್ತ್ರಗಳೂ ನಿರ್ಣಯಿಸಿದ ವಿಶೇಷ ಲಕ್ಷಣ ಇದಾಗಿದೆ. ಹರಿದಾಸರೂ ಇದನ್ನೇ ಸಾರಿ ಸಾರಿ ಹೇಳಿ ಪೊಗಳಿರುವರು.ಜಗನ್ನಾಥದಾಸರು -*ಪ್ರತಿದಿವಸ ತನ್ನಂಘ್ರಿಸೇವಾರತ ಮಹಾತ್ಮರು ಮಾಡುತಿಹ ಸಂ-**ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ ll* ಎಂದರು.ಕಾರುಣ್ಯವೆಂಬ ವಿಶಿಷ್ಟವಾದ ಗುಣ ಭಗವದೈಕನಿಷ್ಠವಾದದ್ದು. ಅದಕ್ಕೆ ಶ್ರೀಮದಾಚಾರ್ಯರು ಅವನಲ್ಲಿ ಏನನ್ನೇ ಸಮರ್ಪಿಸಿದರೂ ಅದು ಅಕ್ಷಯವೆಂದರು.*'ಅಕ್ಷಯಂ ಕರ್ಮ ಯಸ್ಮಿನ ಪರೇ *'ಮರಳಿ ತನಗರ್ಪಿಸಲು ಕೊಟ್ಟದನಂತ ಮಡಿ ಮಾಡಿ'* ಎಂದರು.*ಸುಲಭನೋ ಹರಿ ತನ್ನವರನರಘಳಿಗೆ ಬಿಟ್ಟಗಲನು ರಮಾಧವ-**ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ ll -ಶ್ರೀಜ.ದಾಸರು*ಪುರಂದರರು ಹೇಳುವಾಗ - ಶ್ರೀಹರಿಯನ್ನು ಹೊಂದುವದು ಎಷ್ಟು ಸುಲಭವೆಂದರೆ -*ಮಲಗಿ ಪಾಡಿದರೆ ಕುಳಿತು ಕೇಳುವನು**ಕುಳಿತು ಪಾಡಿದರೆ ನಿಂತು ಕೇಳುವನು**ನಿಂತು ಪಾಡಿದರೆ ನಲಿದು ಕೇಳುವನು**ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆ ಎಂಬ ಪುರಂದರವಿಟ್ಠಲ ll*ಶ್ರೀಹರಿ ತನ್ನ ಭಕ್ತರು ಮಾಳ್ಪ ಅಪರಾಧಗಳನ್ನು ಸಹಿಸುವ, *'ಮನವನಿತ್ತರೆ ತನ್ನನೀವನು*' ಇದೆಂತಹ ಕಾರುಣ್ಯ. ಅದಕ್ಕೆ ಜಗನ್ನಾಥದಾಸರು -*ಏನು ಕರುಣಾನಿಧಿಯೊ ಹರಿಮತ್ತೇನು ಭಕ್ತಾಧೀನನೋ ಇನ್ನೇನು ಈತನಲೀಲೆ....* ಎಂದು ಬಣ್ಣಿಸಿದರು.*ಏನು ಮಾಡುವ ಕರ್ಮ ನೀನೆ ಮಾಡಿಪೆ ಎಂಬ**ಜ್ಞಾನವೆ ಎನಗೆ ಜಿತವಾಗಿ l ಜಿತವಾಗಿ ಇರಲಿ ಮ -**ತ್ತೇನು ನಾನೊಲ್ಲೆ ನಿನ್ನಾಣೆ ll - ಶ್ರೀಜಗನ್ನಾಥದಾಸರು.*ಹಿಂದೆ - ಇಂದು - ಮುಂದೂ ಉಸಿರಾಟದಿಂದಾರಂಭಿಸಿ ಏನೇಕರ್ಮವು ನನ್ನಿಂದ ಮಾಡಲ್ಪಟ್ಟದೆಂದರೆ ಅದು ನೀನೇ ಮಾಡಿ ಮಾಡಿಸಿರುವೆ. *ದೀನ ಮಂದಾರ ಸಿರಿವಿಜಯವಿಟ್ಠಲರೇಯ l**ನೀನೇ ಮಾಳ್ಪವನೆಂಬ ಭಕ್ತರ ಕೈಬಿಡ ll - ಶ್ರೀವಿಜಯದಾಸರು*ಹೀಗೆ ಎಲ್ಲವನ್ನು ಮಾಡಿ ಮಾಡಿಸುವವನು ಆ ಹರಿಯೇ *ಹರಿಯೆ ನಿನ್ನಾಧೀನ ಮನ ಚಿತ್ತಾದಿಗಳು**ಹರಿಯೆ ನಿನ್ನಾಧೀನ ಸಕಲ ಚೇತನವು**ಹರಿಯೆ ನಿನ್ನಾಧೀನ ಸಕಲ ಚೇಷ್ಟೆಗಳು ll -ಶ್ರೀವಿಜಯದಾಸರು**ಕುಣಿಸಿದರೆ ಕುಣಿವೆ ನಗಿಸಿದರೆ ನಗುವೆ**ಮಣಿಸಿದರೆ ಮಣಿವೆ ಅಳಿಸಿದರೆ ಅಳುವೆ**ಉಣಿಸಿದರೆ ಉಣುವೆ ಉಡಿಸಿದರೆ ಉಡುವೆ**ಮನುವೇಷನೆ ಸಿರಿವಿಜಯವಿಟ್ಠಲ ನೀನೇ**ದಣಿಸಿದರೆ ದಣಿವೆ ನೆನೆವಿತ್ತರೆ ನೆನೆವೆ ll -ಶ್ರೀವಿಜಯದಾಸರು.* 2.ಜೀವಿಯ ಚಿಂತನೆಯು ಸದಾ ಶ್ರೀಹರಿಯೇ ಸರ್ವತಂತ್ರ ಸ್ವತಂತ್ರನೆಂದು, ಅನ್ಯರು ಸರ್ವಾತ್ಮನಾ ಅಸ್ವತಂತ್ರರೆಂದು *'ನಾಹಂ ಕರ್ತಾ ಹರಿ ಕರ್ತಾ'* ಎಂಬ ಅನುಸಂಧಾನದಿ ಪ್ರತಿ ಕ್ಷಣವೂ ಬುದ್ಧಿಯಲ್ಲಿ ಆರೂಢವಾಗುವಂತಾಗಿಸುವುದು. *ಶ್ರೀದ ಹನುಮ ಭೀಮ ಮಧ್ವಾಂತರ್ಗತ l**ರಾಮ ಕೃಷ್ಣ ವೇದವ್ಯಾಸಾರ್ಪಿತವೆಂದು ll -ಶ್ರೀವೆಂಕಟವಿಟ್ಠಲರು**ಜ್ಞಾನ ಬಲ ಸುಖ ಪೂರ್ಣವ್ಯಾಪ್ತಗೆ**ಹೀನಗುಣ ನಂಬುವನು, ಈಶ್ವರ**ತಾನೆಂಬುವ ಸಚ್ಚಿದಾನಂದಾತ್ಮಗುತ್ಪತ್ತಿ l**ಶ್ರೀನಿತಂಬಿನಿಗೀಶಗೆ ವಿಯೋ-**ಗಾನುಚಿಂತನೆ ಛೇದಭೇದ ವಿ-**ಹೀನ ದೇಹಗೆ ಶಸ್ತ್ರಗಳ ಭಯ ಪೇಳುವವ ದೈತ್ಯ ll - ಹರಿಕಥಾಮೃತಸಾರ (30-2)*

